ಪ್ರಧಾನಿ ಮೋದಿ ಭೇಟಿಯಾದ ಸರ್ವಧರ್ಮದ 25 ಗುರುಗಳ ನಿಯೋಗ

ನವದೆಹಲಿ: ಸೋಮವಾರ ವಿವಿಧ ಧರ್ಮಗಳ 25 ಧಾರ್ಮಿಕ ಮುಖಂಡರ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಎಲ್ಲಾ ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಮಾತನಾಡಿ, ನಮ್ಮ ಜಾತಿಗಳು, ಆಚಾರಗಳು, ಧರ್ಮಗಳು, ಪ್ರಾರ್ಥನೆ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಮಾನವರಾಗಿ ನಮ್ಮ ದೊಡ್ಡ ಧರ್ಮ ಮಾನವೀಯತೆಯಾಗಿದೆ. ನಾವೆಲ್ಲರೂ ಒಂದೇ ದೇಶದಲ್ಲಿ ವಾಸಿಸುತ್ತಿದ್ದೇವೆ. ನಾವೆಲ್ಲರೂ ಭಾರತೀಯರು ಬನ್ನಿ ನಮ್ಮ ದೇಶವನ್ನು ಬಲಪಡಿಸೋಣ. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ‘ವಿಶ್ವಗುರು’ವಾಗಲು ಹತ್ತಿರವಾಗಿದೆ. ಮತ್ತು ಅದು ಸಂಭವಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ಹೊಸ ಸಂಸತ್ತಿನ ಕಟ್ಟಡದ ಈ ದೃಶ್ಯಗಳು ನಮ್ಮ ದೇಶಕ್ಕೆ ಬದಲಾಗುತ್ತಿರುವ ಕಾಲಕ್ಕೆ ಸಾಕ್ಷಿಯಾಗಿದೆ ಎಂದರು.

ಪಾರ್ಸಿ ಸಮುದಾಯದ ಪ್ರಧಾನ ಗುರು ದಸ್ತೂರ್ ಜಿ ಮಾತನಾಡಿ, ನಾವು ಎಲ್ಲಾ ಧರ್ಮಗಳವರು ಒಂದಾಗಿ ಇಲ್ಲಿಗೆ ಬಂದಿದ್ದೇವೆ, ಪ್ರಧಾನಿ ನರೇಂದ್ರ ಮೋದಿ ಇಲ್ಲಿರುವವರೆಗೆ ನಾವು ಯಾವುದಕ್ಕೂ ಹೆದರುವುದಿಲ್ಲ, ನಾವು ಮುಂದುವರಿಯುತ್ತೇವೆ ಮತ್ತು ನಮ್ಮ ದೇಶವು ಜಗತ್ತಿನಲ್ಲೇ ಶ್ರೇಷ್ಠವಾಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

Advertisement

ಜೈನ ಗುರು ವಿವೇಕ್ ಮುನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯು ಬಹಳ ಉತ್ತಮವಾಗಿತ್ತು. ನಾವು ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನದ ಪರವಾಗಿ ಇಲ್ಲಿ ಒಟ್ಟುಗೂಡಿದ್ದೇವೆ ಎಂದು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement