ಇನ್ಮುಂದೆ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳಿಗೂ ’ಕೆಂಪು ಬಣ್ಣ’

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮಾದರಿಯಲ್ಲಿ ಈಗ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಕೆಂಪು ಬಣ್ಣ ಹೊಂದಲಿದೆ.

1996 ಕ್ಕಿಂತ ಮೊದಲು ಕೆಎಸ್‌ಆರ್‌ಟಿಸಿ ರಾಜ್ಯಕ್ಕೆ ಒಂದೇ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ 1996-97ರಲ್ಲಿ ವಿಭಜನೆಗೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಸ್ವಿತ್ವಕ್ಕೆ ಬಂದಾಗ ಬಸ್‌ಗಳ ಬಣ್ಣ ಬದಲಾಯಿಸಲಾಗಿತ್ತು. ಕೆಂಪು ಬಣ್ಣದ ಬದಲಾಗಿ ತಿಳಿ ಗಿಣಿಹಸುರು ಬಣ್ಣ, ಮಧ್ಯದಲ್ಲಿ ಹಳದಿ-ಕೆಂಪು ಪಟ್ಟಿ ಹೊಂದಿತ್ತು. ಆದರೆ ಇನ್ನು ಮುಂದೆ ಬರುವ ಎಲ್ಲ ಹೊಸ ಬಸ್‌ಗಳು ಕೆಂಪು, ಬೆಳ್ಳಿ ಬಣ್ಣ ಹೊಂದಿರಲಿವೆ.

ರಾಜ್ಯ ಸರಕಾರ ಈ ವರ್ಷ ಖರೀದಿಸುವ ಸಾವಿರದಷ್ಟು ಹೊಸ ಬಸ್‌ಗಳಲ್ಲಿ ಮೊದಲ ಹಂತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ ಸುಮಾರು 375 ಬಸ್‌ಗಳು ಬರಲಿವೆ. ಅದರಲ್ಲಿ 40 ಬಸ್‌ಗಳನ್ನು ಕೆಲವು ದಿನಗಳ ಹಿಂದೆಯಷ್ಟೇ ನೀಡಲಾಗಿದೆ. ಇನ್ನು 335 ಬಸ್‌ಗಳು ಬರಬೇಕಿದೆ. ಈ ಹೊಸ ಬಸ್‌ಗಳನ್ನು ತಿಳಿ ಗಿಣಿಹಸುರು ಬಣ್ಣದಿಂದ ಕೆಂಪು ಬಣ್ಣಕ್ಕೆ ಮಾರ್ಪಡಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡ ತಿಳಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement