ನೀಲ್ಗಾಯ್ ದಾಳಿ ;ಕೋಲಾರ ಮೂಲದ ನೌಕಾಪಡೆ ಯೋಧ ಸಾವು

ಕೋಲಾರ: ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲಾರ ಮೂಲದ ಯೋಧರೊಬ್ಬರು ನೀಲ್ಗಾಯ್ ದಾಳಿಯಿಂದ ಮೃತಪಟ್ಟಿದ್ದಾರೆ.ನಗರದ ಗಲ್​ಪೇಟೆ ನಿವಾಸಿ ಹರ್ಷಿತ್ ಪ್ರಸನ್ನ (22) ಎನ್ನುವ ಯೋಧ ಸಾವನ್ನಪ್ಪಿದವರು. ಜಿಂಕೆ ಮಾದರಿಯ ನೀಲ್ಗಾಯ್ ಎಂಬ ಕಾಡುಪ್ರಾಣಿಯ ಮರಿಗಳು, ಪ್ಲಾಸ್ಟಿಕ್ ತಿನ್ನಲು ಮುಂದಾದಾಗ ಅದನ್ನು ತಡೆಯಲು ಇವರು ಹೋಗಿದ್ದಾರೆ. ಈ ವೇಳೆ ನೀಲ್ಗಾಯ್ ಹಿಂಬದಿಯಿಂದ ಬಂದು ಹರ್ಷಿತ್ ಬೆನ್ನಿಗೆ ತಿವಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರು ಕಳೆದ 4 ವರ್ಷಗಳಿಂದ ನೌಕಾಪಡೆಯ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಕೋಲಾರದ ರುಧ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement