ಚುನಾವಣೆ ಸಮಯದಲ್ಲಿ ಗನ್ ಜಮೆಗೆ ಹಲವರಿಗೆ ರಿಯಾಯತಿ ನೀಡಿದ ಇಲಾಖೆ

ಬೆಂಗಳೂರು: ಯಾವುದೇ ಚುನಾವಣಾ ಸಂದರ್ಭದಲ್ಲಿ ನಾಗರೀಕರು, ರಾಜಕಾರಣಿಗಳು, ಪ್ರಭಾವಿಗಳು ಹಾಗೂ ರೌಡಿ ಶೀಟರ್‌ಗಳು ತಮ್ಮ ಬಳಿ ಇರುವ ಗನ್, ರೈಫಲ್ ಮತ್ತು ಪಿಸ್ತೂಲ್ ಮಾದರಿಯ ಶಸ್ತ್ರಾಸ್ತ್ರಗಳನ್ನು ತಮ್ಮ ಮನೆ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೋ ಆ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಬೇಕಿತ್ತು. ಗನ್ ಜಮೆ ಮಾಡಿ ಚುನಾವಣಾ ಚಟುವಟಿಕೆ ಮುಗಿದ‌ ನಂತರ ಈ ಗನ್‌ಗಳನ್ನು ಬಿಡಿಸಿಕೊಳ್ಳುವುದು ನಿಯಮ.

ಆದರೆ ನಗರ ಪೊಲೀಸ್ ಇಲಾಖೆ ಈ ನಿಯಮದಲ್ಲಿ ಕೆಲ ಬದಲಾವಣೆ ತಂದಿದೆ. ನಾಲ್ಕು ವರ್ಗಗಳನ್ನು ಮಾಡಿರುವ ಇಲಾಖೆ ಈ ನಾಲ್ಕು ವರ್ಗಗಳಿಗೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗತ್ಯವಿಲ್ಲ ಎಂದು ಸೂಚನೆ ಹೊರಡಿಸಿದೆ. ನಾಲ್ಕು ವರ್ಗಗಳು ಯಾವುವು ಎಂದು ನೋಡೋದಾದ್ರೆ

1. ಜಾಮೀನಿನ ಮೇಲೆ‌ಹೊರಗಿರುವ ವ್ಯಕ್ತಿಗಳು

Advertisement

2. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು (ರೌಡಿ ಶೀಟರ್ಸ್)

3. ಈ ಹಿಂದೆ ಯಾವೂದೇ ಸಂದರ್ಭದಲ್ಲಿ ಗಲಭೆಯಲ್ಲಿ ಭಾಗಿಯಾಗಿರೋರು ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ

4. ಯಾವೂದೇ ರೀತಿಯ ಚುನಾವಣಾ ಸಂಭಂಧಿತ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಪರವಾನಗಿ ಈ ಮೇಲ್ಕಂಡ ವರ್ಗದಲ್ಲಿರೋ ವ್ಯಕ್ತಿಗಳು ಖಡ್ಡಾಯವಾಗಿ ಗನ್ ಜಮೆ ಮಾಡಬೇಕು. ಈ ವರ್ಗಕ್ಕೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗ್ಯವಿಲ್ಲ ಎಂದು ಇಲಾಖೆ ಆದೇಶ ಹೊರಡಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement