ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ: ಬಸನಗೌಡ ದದ್ದಲ್‌ ಗೆ ಇಡಿ ಬಂಧನದ ಭೀತಿ

ರಾಯಚೂರು:ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಪ್ರಕರಣ ಹಿನ್ನೆಲೆ ಇ.ಡಿ‌ ಬಂಧನ ಭೀತಿಯಲ್ಲಿರುವ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬೆಳಗ್ಗೆ ಯಾರನ್ನೂ ಭೇಟಿಯಾಗದೆ ಮನೆಯಿಂದ ಅವಸರಲ್ಲಿ ಕಾರು ಹತ್ತಿ ಹೋಗಿದ್ದಾರೆ.

ಮಾಧ್ಯಮದವರ ಕಣ್ಣಿಗೆ ಬೀಳುಬಾರದು ಎಂದು ವೇಗವಾಗಿ ಕಾರಿನಲ್ಲಿ ಹೊರಟು ಹೋಗಿದ್ದಾರೆ. ‌ಬೆಂಗಳೂರು ಕಡೆಗೆ ತಮ್ಮ‌ ಆಪ್ತರ ಜೊತೆ ಹೊರಟಿದ್ದಾರೆ ಎನ್ನಲಾಗಿದೆ. ತಮ್ಮ ಕಾರನ್ನ ಬಳಸದೇ ಕಾರ್ಯಕರ್ತನ ಕ್ರೇಟಾ ಕಾರ್‌ನಲ್ಲಿ ಬಸನಗೌಡ ದದ್ದಲ್‌ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ದದ್ದಲ್‌ಗೆ ಈಗಾಗಲೇ ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದೆ. ಇ.ಡಿ ಬಂಧನ ಭೀತಿಯಲ್ಲಿ ಶಾಸಕರಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರರನ್ನು ಬಂಧಿಸಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement