UPSC ಎಕ್ಸಾಂ ಫೇಲ್‌, ಆದ್ರೂ ಲೈಫ್‌ನಲ್ಲಿ ಗೆದ್ದ ಸಾಧಕಿ ಕಾಜಲ್ ಶ್ರೀವಾಸ್ತವ

WhatsApp
Telegram
Facebook
Twitter
LinkedIn

ನವದೆಹಲಿ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೂ ಕಾಜಲ್ ಶ್ರೀವಾಸ್ತವ ‘ಸ್ವದೇಶಿ ಸ್ಪೋರ್ಟ್ಸ್ ವೇರ್’ ಕಂಪನಿಗಳನ್ನು ಆರಂಭಿಸಿ ಯಶಸ್ವಿಯಾದರು. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಯುಪಿಎಸ್‌ಸಿ ಪರೀಕ್ಷೆ ಭಾರತದಲ್ಲಿಯೇ ಅತ್ಯಂತ ಕಠಿಣವಾದ ಪರೀಕ್ಷೆಗಳಲ್ಲಿ ಒಂದು. ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಬಹುಷಃ ಹಲವಾರು ಮಂದಿ ಫಲಿತಾಂಶ ಬಂದಾಗ ನಿರಾಸೆಯಾಗುತ್ತಾರೆ. ಕೆಲವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಬದುಕಿನಲ್ಲಿ ಮುನ್ನಡೆಯುವುದಿಲ್ಲ. ಆದರೆ ಕೆಲವರು ಮಾತ್ರ, ಈ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ ತಮ್ಮ ಬದುಕಿನಲ್ಲಿ ಹೊಸ ದಾರಿಯನ್ನು ಹುಡುಕಿ ದೊಡ್ಡ ಸಾಧನೆ ಮಾಡುತ್ತಾರೆ. ಅಂತಹ ಸಾಧನೆ ಮಾಡಿದ ಸಾಧಕಿ ಕಾಜಲ್ ಶ್ರೀವಾಸ್ತವ

ಕಾಜಲ್ ಶ್ರೀವಾಸ್ತವ ಅವರು 6 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಪಾಸ್ ಆಗಲಿಲ್ಲ. ಕೊನೆಯ ಪ್ರಯತ್ನದಲ್ಲಿ, 2020ರಲ್ಲಿ ಅವರು ವಿಫಲರಾದಾಗ ತುಂಬಾ ನೋವಾಗಿತ್ತು. ಅವರ ಕುಟುಂಬದವರು ಕೂಡ “ಅವಳು ಸಮಯ, ಹಣ ವ್ಯರ್ಥ ಮಾಡುತ್ತಿದ್ದಾಳೆ” ಎನ್ನುತ್ತಿದ್ದರು. ಆದರೂ, ಕಾಜಲ್ ಹೋರಾಟವನ್ನೇ ನಿಲ್ಲಿಸಲಿಲ್ಲ.

2017ರಲ್ಲಿ ಅವರು ಕಲರಿಪಯಟ್ಟು ಎಂಬ ಭಾರತೀಯ ಯುದ್ಧಕಲೆ ಕಲಿಯಲು ಆರಂಭಿಸಿದರು. ಇದರಿಂದಾಗಿ ಅವರ ಆತ್ಮವಿಶ್ವಾಸ ಹೆಚ್ಚಿತು. ನಂತರ ಅವರು ತವಾಸಿ ಆಂದೋಲನ ಆರಂಭಿಸಿದರು. ಈ ಆಂದೋಲನದ ಮೂಲಕ 2,000ಕ್ಕೂ ಹೆಚ್ಚು ಜನರಿಗೆ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ನೀಡಲು ಸಹಾಯ ಮಾಡಿದರು. ಅಲ್ಲಿಂದ ಮುಂದಾಗಿ, ಕಾಜಲ್ ಉದ್ಯಮಕ್ಕೆ ಕಾಲಿಟ್ಟರು. ನೈಸರ್ಗಿಕ ಸ್ಪೋರ್ಟ್ಸ್ ವಸ್ತ್ರಗಳನ್ನು ತಯಾರಿಸುವ ‘ಸ್ವದೇಶಿ ಸ್ಪೋರ್ಟ್ಸ್ ವೇರ್’ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇದೀಗ ಅವರು ಯಶಸ್ವಿ ಉದ್ಯಮಿಯಾಗಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon