ಚಿತ್ರದುರ್ಗ: ಗಾನಯೋಗಿ ಪಂಚಾಕ್ಷರ ಗವಾಯಿಗಳು ಮತ್ತು ಪುಟ್ಟರಾಜ ಕವಿ ಗವಾಯಿಗಳು ಸಮಾಜ, ಸಂಗೀತ ಮತ್ತು ದೀನದಲಿತರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಗುರುಕಲ್ಮಿಟ್ನ ಶ್ರೀ ಶಾಂತವೀರ ಮುರುಘ ಶ್ರೀಗಳು ತಿಳಿಸಿದರು.
ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಲಿಂ. ಪಂಚಾಕ್ಷರ ಗವಾಯಿಗಳ 81ನೇ ಹಾಗೂ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾನುವಾರ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಗಾನಯೋಗಿ ಪಂಡಿತ್ ಪಂಚಾಕ್ಷರ ಗವಾಯಿ ಒಬ್ಬ ಹಿಂದೂಸ್ತಾನಿ ಸಂಗೀತಗಾರ ಮತ್ತು ಕರ್ನಾಟಕದ ಗುರುವಾಗಿದ್ದರು, ಪಂಚಾಕ್ಷರ ಗವಾಯಿ ತಬಲಾ ಜೊತೆಗೆ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಶೈಲಿಗಳೆರಡರಲ್ಲೂ ಪರಿಣಿತರಾಗಿ ಬೆಳೆದು ಜನಪ್ರಿಯರಾದರು. ಹಾನಗಲ್ ಕುಮಾರ ಸ್ವಾಮೀಜಿಯವರ ಆಜ್ಞೆಯಂತೆ, ಅವರು ಕುರುಡು ಮತ್ತು ಅನಾಥ ಮಕ್ಕಳಿಗೆ ಸಂಗೀತದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಅವರು ಬ್ರಹ್ಮಚಾರಿಯಾಗಿ ಉಳಿದು ಕಡಿಮೆ ಸೌಲಭ್ಯ ಹೊಂದಿರುವ ಜನರಿಗೆ ಸೇವೆ ಸಲ್ಲಿಸಿದರು.ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ’ವನ್ನು ಸ್ಥಾಪನೆ ಮಾಡಿದ್ದು, ಇದು ಈಗ ಸಂಗೀತ ಪ್ರಿಯರಿಗೆ ತೀರ್ಥಯಾತ್ರೆಯ ಕೇಂದ್ರವಾಗಿದೆ. ಸಾವಿರಾರು ಅಂಧ, ಬಡ ಹುಡುಗರು ಇಲ್ಲಿ ಸಂಗೀತ ಕಲಿತು ದೇಶಾದ್ಯಂತ ಸಂಗೀತಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದ ಶ್ರೀಗಳು ಗಾನಯೋಗಿ ಪಂಚಾಕ್ಷರ ಗವಾಯಿ ಸಮಾಜ, ಸಂಗೀತ ಮತ್ತು ದೀನದಲಿತರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದರು.
ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ.ಶೈಲಾ ವಿಜಯಕುಮಾರ್ ಉಭಯ ಶ್ರೀಗಳ ಬಗ್ಗೆ ಉಪನ್ಯಾಸವನ್ನು ನೀಡಿ, ಉಭಯ ಶ್ರೀಗಳು ತಮ್ಮ ಚಿಂತನ ಮಂಥನದಿಂದ ದೊಡ್ಡವರಾಗಿದ್ದಾರೆ. ಸಂಗೀತದ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಗವಾಯಿಗಳಿಗೆ ಭೌತಿಕವಾಗಿ ಅಂಧರಾಗಿದ್ದರೂ ಸಹಾ ಅಂತರಿಕವಾಗಿ ಒಳಗಣ್ಣನಿಂದ ಲೋಕವನ್ನು ನೋಡುತ್ತಾ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದರು, ಇಂತಹ ಗವಾಯಿಗಳು ನಮಗೆ ಆದರ್ಶವಾಗಬೇಕಿದೆ. ತಮಲ್ಲಿ ದೃಷ್ಟಿ ಇಲ್ಲದಿದ್ದರೂ ಸಹಾ ಬೇರೆಯವರ ದೃಷ್ಟಿ ಕೋನವನ್ನು ಗವಾಯಿಗಳು ಬದಲಾಯಿಸಿದ್ದಾರೆ. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ್ ಬಸವಣ್ಣ ರವರನ್ನು ದೆಹಲಿಯವರೆಗೂ ಕೊಂಡ್ಯೋದ ಕೀರ್ತಿ ಗವಾಯಿಗಳಿಗೆ ಸಲ್ಲುತ್ತದೆ ಎಂದರು.
ಅಂಧರಾಗಿದ್ದ `ಪಂಚಾಕ್ಷರ ಗವಾಯಿ’ಯವರ ಅವರ ಹುಟ್ಟು ಹೆಸರು ಗದಿಗೆಯ್ಯ. ಹುಟ್ಟು ಕುರುಡರಾದ ಗದಿಗೆಯ್ಯ ಮತ್ತು ಅವರ ಅಣ್ಣ ಗುರುಬಸವ ಇಬ್ಬರೂ ಮಧುರವಾದ ಧ್ವನಿ ಮತ್ತು ಸಂಗೀತ ಪ್ರತಿಭೆಯನ್ನು ಹೊಂದಿದ್ದರು. ಅವರು ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಅವರ ಸಂಗೀತ ಸಾಮಥ್ರ್ಯದಿಂದ ಸಂತಸಗೊಂಡ ಹಾನಗಲ್ಲಿನ ಶ್ರೀ ಕುಮಾರ ಸ್ವಾಮೀಜಿ ಅವರಿಗೆ ಸರಿಯಾದ ಸಂಗೀತ ತರಬೇತಿಯನ್ನು ಏರ್ಪಡಿಸಲು ಮುಂದೆ ಬಂದರು. ತಂಜಾವೂರಿನ ಸಂಗೀತಗಾರರೊಬ್ಬರು ಈ ಮಕ್ಕಳಿಗೆ ಸ್ವಲ್ಪ ಸಮಯ ದವರೆಗೆ ಕರ್ನಾಟಕ ಸಂಗೀತವನ್ನು ಕಲಿಸಿದರು ಎಂದು ತಿಳಿಸಿದರು.
ಅಂಧ ಬಾಲಕ ಗದಿಗೆಯ್ಯ ಸಂಗೀತಾಭ್ಯಾಸ ಮುಂದುವರಿಸಲು ಮೈಸೂರಿಗೆ ಹೋದ. ವಿದ್ವಾನ್ ವೆಂಕಟರಮಣಯ್ಯ ಅವರ ಬಳಿ 4 ವರ್ಷ ಕಲಿತರು. ಗದಿಗೆಯ್ಯ ಮೈಸೂರಿನಲ್ಲಿ ಜನಪ್ರಿಯರಾದರು ಅಖಿಲ ಭಾರತ ವೀರಶೈವ ಸಮಾವೇಶದಲ್ಲಿ ಹಾಡಿ ಮೆಚ್ಚುಗೆ ಗಳಿಸಿದರು. ಕುಮಾರ ಸ್ವಾಮೀಜಿ ಅವರಿಗೆ `ಪಂಚಾಕ್ಷರ ಗವಾಯಿ’ ಎಂಬ ಹೊಸ ಹೆಸರನ್ನಿಟ್ಟರು. ಕುಮಾರ ಸ್ವಾಮೀಜಿ ರೋಣದಲ್ಲಿ ‘ಕುಮಾರೇಶ್ವರ ಕೃಪೋಷಿತ ಸಂಗೀತ – ಸಾಹಿತ್ಯ ಮಹಾವಿದ್ಯಾಲಯ’ವನ್ನು ಪ್ರಾರಂಭಿಸಿದಾಗ, ಪಂಚಾಕ್ಷರ ಗವಾಯಿ ಅದರ ಮುಖ್ಯಸ್ಥರಾ ದರು. ತಮ್ಮ ಗುರುಗಳ ಆಶಯವನ್ನು ಪಾಲಿಸಿದರು. ಅವರ ಸಂಚಾರಿ ಸಂಗೀತ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳಿದ್ದರು.ಗದಗಿನ ಶ್ರೀಮಂತ ಭಕ್ತ ಶ್ರೀ ಬಸರಿಗಿಡದ ವೀರಪ್ಪ ಅವರು ತಮ್ಮ ಭೂಮಿಯನ್ನು ದಾನ ಮಾಡಿ ಗವಾಯಿಗಾಗಿ ಅಲ್ಲಿ ಒಂದು ಆಶ್ರಮವನ್ನು ನಿರ್ಮಿಸಿದರು. ಈ ಆಶ್ರಮವು ಪ್ರಸಿದ್ಧ ‘ವೀರೇಶ್ವರ ಪುಣ್ಯಾಶ್ರಮ’ ವಾಗಿz Éಪಂಚಾಕ್ಷರ ಗವಾಯಿಯವರ ಅನೇಕ ವಿದ್ಯಾರ್ಥಿಗಳು ಇಂದು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ, ಸಾಧನೆಯನ್ನು ಮಾಡಿದ ಹಿರಿಯ ಪತ್ರಕರ್ತರು, ಬರಹಗರರಾದ ಜಿ.ಎಸ್.ಉಜ್ಜನಪ್ಪ, ಜಾನಪದ ಗಾಯಕಿ ಶ್ರೀಮತಿ ಸುಶೀಲಮ್ಮ, ಪರಿಸರ ಪ್ರೇಮಿ ಸಿದ್ದರಾಜು ಜೋಗಿ, ಸಂಗೀತಗರರಾದ ರಾಮಲಿಂಗ ಜಲ್ಲಾಪುರ ಹಾಗೂ ರಂಗಕರ್ಮಿ ಪ್ರಕಾಶ್ ಬಾದರದಿನ್ನಿಯವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಎಂ.ತೋಟಪ್ಪ ಉತ್ತಂಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಮ್ಮ ರುದ್ರಪ್ಪ, ಶ್ರೀಮತಿ ಉಮಾ ರಮೇಶ್, ಶ್ರೀಮತಿ ಪ್ರೇಮ ಬಾಲಚಂದ್ರಪ್ಪ, ಶ್ರೀಮತಿ ನೀಲಮ್ಮ ಬಸಯ್ಯ ಹಾಗೂ ಬ್ರಹ್ಮಚಾರಿ ಕೆ.ಎಂ. ವಿರೇಶ್, ನಾಗರಾಜ್ ಸಗಂ, ಶ್ರೀ ಗಾನಯೋಗಿ ಸಂಗೀತ ಬಳಗದ ಕಾರ್ಯಾಧ್ಯಕ್ಷರಾದ ನಂದೀಶ್ ಜಿ.ಟಿ, ಜ್ಞಾನಮೂರ್ತಿ ಭಾಗವಹಿಸಿದ್ದರು.
ವರದಶಂಕರ್ ಸ್ವಾಗತಿಸಿದರೆ, ಶ್ರೀಮತಿ ಜಗದೀಶ್ವರಿ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ನೇತ್ರಾ ವಂದಿಸಿದರು, ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಹಿಂದೂಸ್ತಾನಿ ಗಾಯಕರಾದ ಆನಂದ ಪಾಟೀಲ್ ಗೀತನಮನ ಸಲ್ಲಿಸಿದರೆ ಕುಮಾರಿ ಗಾನಶ್ರೀಯವರು ಗೀತ ನೃತ್ಯವನ್ನು ಮಾಡಿದರು.