ತುಮಕೂರು: ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಅಡುಗೆ ಅನಿಲ ಮಿತವಾಗಿ ಬಳಸುವಂತೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಳಿ ಇರುವುದನ್ನು ಸುಮ್ಮನೆ ಖರ್ಚು ಮಾಡಬೇಡಿ. ಐದು ಬಾರಿ ಯೋಚಿಸಿ ಬಳಸಿ ಎಂದು ಜನತೆಗೆ ಕಿವಿಮಾತು ಹೇಳಿದ್ದಾರೆ.
ನೀರು, ವಿದ್ಯುತ್, ಗ್ಯಾಸ್ ಅಮೂಲ್ಯವಾದದ್ದು. ನಮಗೆ ಸಿಕ್ಕಿದ್ದು ಇನ್ನೊಬ್ಬರಿಗೂ ಸಿಗಲಿ ಎನ್ನುವ ಉದಾರತೆ ಇರಲಿ. ಪ್ರತಿಯೊಂದು ವಸ್ತುವನ್ನು ಖರ್ಚು ಮಾಡುವಾಗ ಐದು ಬಾರಿ ಯೋಚಿಸಬೇಕು. ನಮ್ಮ ಬಳಿ ಹೆಚ್ಚಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕೊರತೆ ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಕೆ ಮಾಡಿ ಎಂದು ಹೇಳಿದ್ದಾರೆ.
ಮಠದಲ್ಲಿ ಸೌದೆ, ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆ. ಚಪಾತಿ ಮಾಡಲು ಅನಿವಾರ್ಯ ಸಂದರ್ಭಗಳಲ್ಲಿ ಗ್ಯಾಸ್ ಬಳಸಲಾಗುವುದು. ಮುಂದಿನ ದಿನಗಳಲ್ಲಿ ಗೋಬರ್ ಗ್ಯಾಸ್ ಪ್ಲಾಂಟ್ ಅಳವಡಿಸುವ ಆಲೋಚನೆ ಇದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
































