ಬೆಂಗಳೂರು: ಯಕ್ಷಗಾನ ಲೋಕದ ಕಪ್ಪೆಕೆರೆ ಸುಬ್ರಾಯ ಹೆಗಡೆ(79) ವಿಧಿವಶರಾಗಿದ್ದಾರೆ. ಅವರ ಅಗಲಿಕೆಯಿಂದ ಬಡಗುತಿಟ್ಟು ಯಕ್ಷಗಾನ ರಂಗದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.
1947ರಲ್ಲಿ ಹೊನ್ನಾವರದ ಹಡಿನಬಾಳದಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ಹೆಗಡೆ ದಂಪತಿಗಳ ಪುತ್ರನಾಗಿ ಜನಿಸಿದ ಸುಬ್ರಾಯರು, ಮೂಲತಃ ಯಕ್ಷಗಾನದ ಮನೆಯಿಂದಲೇ ಬಂದವರು. ಯಕ್ಷಗಾನದಲ್ಲಿ ಒಬ್ಬ ಕಲಾವಿದ ಭಾಗವತನೂ ಆಗಿ, ವೇಷಧಾರಿಯೂ ಆಗಿ, ಜೊತೆಗೆ ವಾದಕನೂ ಆಗಿಯೂ ಗುರುತಿಸಿಕೊಂಡಿದ್ದ ಇವರು, ಈ ಎಲ್ಲಾ ರಂಗಗಳಲ್ಲಿ ಪರಿಣತಿ ಸಾಧಿಸಿದ್ದರು.

































