ವಿಶಾಖಪಟ್ಟಣಂ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು

ಚೆನ್ನೈ: ವಿಶಾಖಪಟ್ಟಣಂನಲ್ಲಿರುವ ಇಂದಿರಾಗಾಂಧಿ ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿಯೊಂದು ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹೇಶ್ವರಿ ಎಂಬ ಹೆಸರಿನ ಹೆಣ್ಣು ಸಿಂಹ ಶನಿವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸಿಂಹಿಣಿಗೆ ವಯಸ್ಸಾಗಿದ್ದು ಹೃದಯಾಘಾತಗೊಂಡು ಮೃತಪಟ್ಟಿರುವುದಾಗಿ ವೈಜಾಗ್ ಮೃಗಾಲಯದ ಕ್ಯೂರೇಟರ್ ನಂದಾನಿ ಸಲಾರಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

2006 ರಲ್ಲಿ ಜನಿಸಿದ ಮಹೇಶ್ವರಿ 2019 ರಲ್ಲಿ ಗುಜರಾತ್‌ನ ಸಕ್ಕರ್‌ಬಾಗ್ ಮೃಗಾಲಯದಿಂದ ವೈಜಾಗ್ ಮೃಗಾಲಯಕ್ಕೆ ತರಲಾಗಿತ್ತು. ಅಧಿಕಾರಿಗಳ ಪ್ರಕಾರ, ಸಿಂಹಗಳು ಕಾಡಿನಲ್ಲಿ ಸುಮಾರು 16 ರಿಂದ 18 ವರ್ಷಗಳವರೆಗೆ ಬದುಕುತ್ತವೆ, ಆದರೆ ಮಹೇಶ್ವರಿ 19 ವರ್ಷಗಳ ಕಾಲ ಯಶಸ್ವಿಯಾಗಿ ಬದುಕಿದೆ ಎಂದು ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement