ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲೇ ಕಳ್ಳನ ಕೈಚಳಕ; ಶಾಸಕರ ಆಪ್ತ ಸಹಾಯಕನ ಜೇಬಿನಿಂದ ಹಣ ಕದ್ದು ಪರಾರಿ

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಕಾರ್ಯಕ್ರಮದಲ್ಲಿ ಕಳ್ಳ ಕೈಚಳಕ ತೋರಿಸಿದ ಘಟನೆ ಮಾಗಡಿ ತಾಲೂಕಿನ ಕುದೂರಿನಲ್ಲಿ ನಡೆದಿದೆ. ಶಾಸಕ‌ ಎಚ್.ಸಿ.ಬಾಲಕೃಷ್ಣ ಅವರ ಆಪ್ತ ಸಹಾಯಕನ ಜೇಬಿನಿಂದ ಬರೊಬ್ಬರಿ 50 ಸಾವಿರ ಹಣವನ್ನು ಕಳ್ಳತನ ಮಾಡಲಾಗಿದೆ. ಇದೀಗ ಸುತ್ತಮುತ್ತಲಿನ ಸ್ಥಳದಲ್ಲಿ ಕಳ್ಳನ ಪತ್ತೆಗಾಗಿ ಕುದೂರು ಪೊಲೀಸರು ಬಲೆಬೀಸಿದ್ದಾರೆ.

ಇನ್ನು ಇದೇ ಅಕ್ಟೋಬರ್​ 01 ರಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಅಸಮಧಾನ ವ್ಯಕ್ತಪಡಿಸಿದ್ದ ಜೆಡಿಎಸ್  ಶಾಸಕರನ್ನು ಕರೆಯಿಸಿ ರಾಮನಗರ ಬಿಡದಿ ತೋಟದಲ್ಲಿ ​​ಸಭೆ ನಡೆಸಲಾಗಿತ್ತು. ಈ ವೇಳೆ ಕಾರ್ಯಕರ್ತನ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿತ್ತು.  ಹೌದು, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿಸುವ ವೇಳೆ‌ ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ ಬರೊಬ್ಬರಿ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಯಕರ್ತರು, ಕಳ್ಳನನ್ನ ಹಿಡಿದಿದ್ದರು. ಕೂಡಲೇ ಕುಮಾರಸ್ವಾಮಿ ಗನ್ ಮ್ಯಾನ್​ಗಳಿಂದ ಖದೀಮನಿಗೆ ಗೂಸಾ ಕೊಡಲಾಗಿತ್ತು. ಇದೀಗ ಇಂತಹ ಘಟನೆ ನಡೆದಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement