ಇಸ್ರೇಲ್‌ನಲ್ಲಿ ಸಂಭವಿಸಿದ ವಿನಾಶ ಕಾಶ್ಮೀರದಲ್ಲಿಯೂ ನಡೆಯಲಿದೆ – ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆ

ನವದೆಹಲಿ : ಇಸ್ರೇಲ್‌ ಹಮಾಸ್ ಉಗ್ರರು ದಾಳಿ ಮಾಡಿ ಭಾರಿ ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಅಲ್ಲದೇ, ಇಸ್ರೇಲ್‌ ಕೂಡಾ ಮರು ದಾಳಿ ನಡೆಸಿ ಹಮಾಸ್ ಉಗ್ರರಿಗೆ ತಕ್ಕ ತಿರುಗೇಟು ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ, ಪಾಕ್ ಜನರು ಹಾಗೂ ಪಾಕ್‌ನ ಅನೇಕ ಮೂಲಭೂತವಾದಿಗಳು ಭಾರತಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ. ಇಸ್ರೇಲ್‌ನಲ್ಲಿ ಸಂಭವಿಸಿದ ವಿನಾಶ ಕಾಶ್ಮೀರದಲ್ಲೂ ನಡೆಯಲಿದೆ ಎಂದು ಪಾಪಿ ಪಾಕಿಗಳು ಭಾರತಕ್ಕೆ ಬೆದರಿಕೆ ಒಡ್ಡುತ್ತಿವೆ. ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿದ್ದ ಅಬ್ದುಲ್ ಬಾಸಿತ್ ಕೂಡ ಇದೇ ರೀತಿಯ ಮಾತನ್ನು ಹೇಳಿದ್ದು, ಪಾಕಿಸ್ತಾನಿ ಜನರು ಇಸ್ರೇಲಿ ನಾಗರಿಕರ ಶವಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ನಾವು 12 ನಿಮಿಷಗಳಲ್ಲಿ ಇಸ್ರೇಲ್ ಅನ್ನು ನಿರ್ಮೂಲನೆ ಮಾಡಬಹುದು ಎಂದು ಪಾಕಿಸ್ತಾನದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಾವು ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ಬಯಸಿದರೆ, ಕಾಶ್ಮೀರದ ವಿಷಯವನ್ನು ಚರ್ಚಿಸಬೇಕು. ಭಾರತ ಮತ್ತು ಇಸ್ರೇಲ್ ತಮ್ಮ ಅಕ್ರಮ ಆಕ್ರಮಣವನ್ನು ತೊರೆಯಬೇಕಾಗುತ್ತದೆ ಎಂದು ಬಸಿತ್ ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement