ಅತಿ ವೇಗದ ಸವಾರಿ ತಂದ ಸಂಕಷ್ಟ – ಟೀಮ್ ಇಂಡಿಯಾ ಕ್ಯಾಪ್ಟನ್‌ ರೋಹಿತ್ ಶರ್ಮಾಗೆ ಮೂರು ನೋಟೀಸ್ ಜಾರಿ

ಭಾರತದ ಆರ್ಥಿಕ ರಾಜಧಾನಿ ಮುಂಬೈನಿಂದ 90 ಕಿಮೀ ದೂರದಲ್ಲಿರುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಅತಿ ವೇಗದ ಚಾಲನೆಗಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಸಂಕಷ್ಟ ಎದುರಾಗಿದ್ದು, ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಮೂರು ನೋಟೀಸ್ ಜಾರಿ ಮಾಡಲಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತೊಂದರೆಗೆ ಸಿಲುಕಿದ್ದಾರೆ. ಪುಣೆ ಸಂಚಾರ ವಿಭಾಗದ ಅಧಿಕಾರಿಗಳ ಪ್ರಕಾರ, ಅವರು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದರು, 200kmph ಮೀರಿದೆ ಮತ್ತು ಕೆಲವೊಮ್ಮೆ 215kmph ಅನ್ನು ತಲುಪುತ್ತಿದ್ದರು. ಇಂದು ಬಾಂಗ್ಲಾದೇಶ ವಿರುದ್ಧದ ಮುಂದಿನ ವಿಶ್ವಕಪ್ ಏನಕದಿನ ನಾಲ್ಕನೇ ಪಂದ್ಯಕ್ಕಾಗಿ ತನ್ನ ಸಹ ಆಟಗಾರರನ್ನು ಸೇರಲು ಪುಣೆ ನಗರಕ್ಕೆ ಹೋಗುವ ಮಾರ್ಗದಲ್ಲಿ ತಮ್ಮ ಲ್ಯಂಬೋರ್ಗಿನಿ ಕಾರನ್ನು ಅತಿ ವೇಗವಾಗಿ ಚಲಾಯಿಸಿ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು, ಎಲ್ಲ ಆಟಗಾರರು ಒಟ್ಟುಗೂಡಿ ಪ್ರಯಾಣ ಮಾಡಲು ಪೊಲೀಸ್ ಬೆಂಗಾವಲು ತಂಡದ ಬಸ್‌ ವ್ಯವಸ್ಥೆ ಇರುತ್ತದೆ. ಆದರೆ, ಅದನ್ನು ಆಯ್ಕೆ ಮಾಡದೇ ತಮ್ಮ ಸ್ವಂತ ಕಾರಿನಲ್ಲಿ ಅತಿವೇಗ ಚಾಲನೆ ಮಾಡಿ ಪುಣೆ ತಲುಪಿದ್ದು ಸಂಕಷ್ಟಕ್ಕೆ ಕಾರಣವಾಗಿದೆ. ಇತ್ತೀಚೆಗೆ, ಮಹಾರಾಷ್ಟ್ರದ ಸಾರಿಗೆ ಕಮಿಷನರ್ ವಿವೇಕ್ ಭೀಮನ್‌ವರ್ಹಾಡ್, ಮುಂಬೈ-ಪುಣೆ ಮತ್ತು ಪುಣೆ-ಕೊಲ್ಹಾಪುರ ಹೆದ್ದಾರಿಯಲ್ಲಿ ಅತಿವೇಗ, ಲೇನ್ ಕಟಿಂಗ್, ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವವರು ಮತ್ತು ಸೀಟ್ ಬೆಲ್ಟ್ ಧರಿಸದವರನ್ನು ಹಿಡಿಯಲು ಮೂರು ತಿಂಗಳ ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement