‘ಬರದ ಸಮಸ್ಯೆ ಇದ್ದರು ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ’- ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

ಬೆಂಗಳೂರು: ರಾಜ್ಯದ ಜನತೆ ಬರದ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಅಲ್ಲೇನು ಪಾಕಿಸ್ತಾನಕ್ಕೆ ಬೆಂಬಲ ಕೊಡೋಕೆ ಹೋಗಿದ್ದ, ಆಸ್ಟ್ರೇಲಿಯಾಗೆ ಬೆಂಬಲ ಕೊಡೋಕೆ ಹೋಗಿದ್ದ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಜೆಪಿ ಭವನದಲ್ಲಿಂದು  ಮಾತನಾಡಿದ ಅವರು, ಸಿಎಂ ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಭಾರತ ತಂಡ ಆಡುವಾಗ ಬೆಂಬಲ ಕೊಡುತ್ತಿದ್ದರೆ ಪರವಾಗಿಲ್ಲ. ಬೇರೆ ಮ್ಯಾಚ್ ನೋಡೋದಕ್ಕೆ ಇಡೀ ಸಿಎಂ, ಡಿಸಿಎಂ, ಪಟಾಲಂ ಹೋಗಿದೆ. ಬರದ ಸಮಸ್ಯೆ ಇದ್ದರು ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ ಎಂದು ಕಿಡಿಕಾರಿದ್ದರೆ.

ರಾತ್ರಿ 8 ಗಂಟೆ ಮ್ಯಾಚ್ ನೋಡೊಕೆ ನಿಮಗೆ ಸಮಯ ಇದೆ. ಜನರ ಕರೆಂಟ್ ಸಮಸ್ಯೆಗೆ ಪರಿಹಾರಸೋದಕ್ಕೆ ಆಗುತ್ತಿಲ್ವಾ. ಇಂತಹ ಸಮಯದಲ್ಲಿ ಮ್ಯಾಚ್ ನೋಡೋ ಅವಶ್ಯಕತೆ ಇತ್ತ ಎಂದು ಗುಡುಗಿದ್ದಾರೆ.

Advertisement

ಅ.20 ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ವೀಕ್ಷಣೆ ಮಾಡಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement