ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ವಿಜಯೇಂದ್ರ ನೇಮಕ: ಸಚಿವರಾದ ಡಿ.ಸುಧಾಕರ್ ವ್ಯಂಗ.!

 

 

ಚಿತ್ರದುರ್ಗ : ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ವಿಜಯೇಂದ್ರ ನೇಮಕ ವಿಚಾರ ಹೊಸ ಬಾಟಲಿಯಲ್ಲಿ ಹಳೆ ವೈನ್ ನೋ ರಿಯಾಕ್ಷನ್ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ವ್ಯಂಗವಾಡಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅವರ ಪಕ್ಷದಲ್ಲಿ ಅಸಮಾಧಾನ ಅವರ ಆಂತರಿಕ ವಿಚಾರ, ನಾವು ಮೂಗು ತೂರಿಸಲ್ಲ. ನಮ್ಮ ಸಿದ್ದಾಂತ ಬೇರೆ, ಅವರ ಸಿದ್ದಾಂತ ಬೇರೆ. ಅವರು ಸಮಾಜ ಹೊಡೆಯುವ ನೀತಿ ಹೊಂದಿದ್ದಾರೆ. ಬಿಜೆಪಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ಅಧಿಕಾರ ಪಡೆಯಲ್ಲ ಎಂದರು.

ಡಿ.ಕೆ.ಶಿವಕುಮಾರ್ಗೆ ವಿಜಯೇಂದ್ರ ಅವರನ್ನ ಹೋಲಿಕೆ ಮಾಡ್ಬೇಡಿ. ಅವರ ಅನುಭವ, ತಾಳ್ಮೆ, ಪಕ್ಷ ಸಂಘಟನೆ  ಅವರಿಗೆ ಒಲಿಕೆ ಸರಿಯಲ್ಲ. ಎಲ್ಲಾ ಜಾತಿಯವರು ನಮ್ಮ ಪಕ್ಷದ ಜೊತೆಗೆ ಇದ್ದಾರೆ. ಎಸ್.ಟಿ.ಸೋಮಶೇಖರ್ ಹೇಳಿಕೆ ಬಿಜೆಪಿ ವಿರುದ್ದ ಅಸಮಾಧಾನ ವಿಚಾರ. ಸೋಮಶೇಖರ್ ನನ್ನ ಆಪ್ತ, ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಹಲವು ಕಾರಣಗಳಿಂದ ಆಪರೇಷನ್ ಕಮಲಕ್ಕೆ ಹೋಗಿದ್ದರು, ವಾಪಸ್ ಬರುತ್ತಾರೆ ಎಂದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement