ಗುವಾಹಟಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ

ಮುಂಬೈ: ಭಾರತದಿಂದ ಪ್ರಯಾಣಿಕರನ್ನು ಮುಂಬೈನಿಂದ ಗುವಾಹಟಿಗೆ ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನ ಸುತ್ತಲು ಮಂಜು ಮುಸುಕಿದ್ದರಿಂದ ಕಾರಣ ಬ್ಲಾಂಗಾ ದೇಶದ ರಾಜಧಾನಿ ಢಾಕಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಮಹಾರಾಷ್ಟ್ರ ಯುವ ಕಾಂಗ್ರೆಸ್ ನ ಸೂರಜ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಈ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಸೂರಜ್ ಸಿಂಗ್ ಠಾಕೂರ್ ಕೂಡ ಇದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿದ ಅವರು, ನಾನು ಮುಂಬೈನಿಂದ ಗುವಾಹಟಿಗೆ ಇಂಡಿಗೊ 6E–5319 ವಿಮಾನದಲ್ಲಿ ತೆರಳುತ್ತಿದ್ದೆ. ದಟ್ಟ ಮಂಜಿನ ಕಾರಣದಿಂದ ಈ ವಿಮಾನ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗದೇ ಢಾಕಾದಲ್ಲಿ ಇಳಿದಿದ್ದು ಮಾತ್ರವಲ್ಲದೇ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪಾಸ್ಪೋರ್ಟ್ ಇಲ್ಲದೆ ಅಂತರರಾಷ್ಟ್ರೀಯ ಗಡಿ ದಾಟಿದ್ದೇವೆ.

ಇನ್ನು ನಾವು ಸುಮಾರು 9 ಗಂಟೆಗಳ ಕಾಲ ವಿಮಾನದೊಳಗೆ ಸಿಲುಕಿಕೊಂಡಿದ್ದೇವೆ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಬಂಧ ಪಟ್ಟ ಅಧಿಕಾರಿಗಳು, ವಿಮಾನವು ದಟ್ಟವಾದ ಮಂಜಿನಿಂದಾಗಿ ಗುವಾಹಟಿಯಲ್ಲಿ ಇಳಿಯಲು ಸಾಧ್ಯವಾಗದೇ ಅಂತರರಾಷ್ಟ್ರೀಯ ಗಡಿ ದಾಟಿದೆ. ಈಗ ಯಾವ ಪ್ರಯಾಣಿಕರಲ್ಲೂ ಪಾಸ್ ಪೋರ್ಟ್ ಇಲ್ಲ. ಈ ಕಾರಣದಿಂದ ಪ್ರಯಾಣಿಕರನ್ನು ವಿಮಾಣ ನಿಲ್ದಾಣದಲ್ಲಿ ವಿಮಾನದೊಳಗೆ ಕುಳಿತುಕೊಳ್ಳುವಂತೆ ಹೇಳಲಾಗಿದೆ.

ಆದರೆ ಅದಷ್ಟು ಬೇಗ ಢಾಕದಿಂದ ವಿಮಾನವನ್ನು ನಿರ್ವಹಿಸುವ ಪರ್ಯಾಯ ಸಿಬ್ಬಂದಿಯನ್ನು ವ್ಯವಸ್ಥೆ ಮಾಡಲಾಗುತ್ತದೆ. ಇದರೊಂದಿಗೆ ಪ್ರಯಾಣಿಕರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement