ತಿರುಪತಿ ಪ್ರಸಾದ ವಿಚಾರದಲ್ಲಿ ಹಿಂದಿನ ಸಿಎಂ ಮೇಲೆ ನಾನು ಆರೋಪ ಮಾಡಲ್ಲ – ಪವನ್ ಕಲ್ಯಾಣ್

ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದದಲ್ಲಿ ದನದ ಕೊಬ್ಬು, ಮೀನು ಎಣ್ಣೆ ಬಳಸಿರುವ ಅಂಶ ಬಯಲಾದ ನಂತರ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪವಾಸ ವ್ರತ ಕೈಗೊಂಡಿದ್ದಾರೆ. ಈ ವಿಚಾರವಾಗಿ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಅವರು, ಈ ವಿಚಾರದಲ್ಲಿ ಹಿಂದಿನ ಮುಖ್ಯಮಂತ್ರಿಯನ್ನು ನಾನು ದೂಷಿಸಲಾರೆ. ನೇಮಿಸಲಾಗಿದ್ದ ಸಮಿತಿ ಮಾಡಿದ ಪ್ರಮಾದದಿಂದ ಈ ಅವಘಡ ಆಗಿದೆ. ಈ ವಿವಾದದಲ್ಲಿ ಪ್ರಧಾನ ಮಂತ್ರಿ ಮೋದಿಯನ್ನು ನಡುವೆ ತರಬೇಡಿ. ಯಾರಿಂದ ತಪ್ಪು ಆಗಿದೆಯೋ ಅವರಿಂದಲೇ ಸರಿಪಡಿಸುವ ಕೆಲಸ ಆಗಬೇಕು. ಮತ್ತು ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೇ ಬಿಡಕೂಡದು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement