ಬೆಂಗಳೂರು: ಸಾವಯವ ಕೃಷಿ ಕ್ಷೇತ್ರದಲ್ಲಿ ‘ಸಾಯಿಲ್ ವಾಸು’ ಎಂದೇ ಜನಜನಿತರಾಗಿದ್ದ ಪಿ.ಶ್ರೀನಿವಾಸ್ (65) ಹೃದಯಾಘಾತದಿಂದಾಗಿ ನಿಧನರಾದರು.
ಮೃತರಿಗೆ ತಾಯಿ, ಪತ್ನಿ ಹಾಗೂ ಪುತ್ರ ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12ಕ್ಕೆ ಹೆಬ್ಬಾಳದಲ್ಲಿ ನಡೆಯಲಿದೆ. 90ರ ದಶಕದಿಂದ ಸಾವಯವ ಕೃಷಿ ತರಬೇತಿ, ಪ್ರಚಾರದಲ್ಲಿ ಸಕ್ರಿಯರಾಗಿದ್ದ ವಾಸು ದೇಶದ ಸಾವಯವ ಕೃಷಿ ದಿಗ್ಗಜರೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ‘SOIL’ ಎಂಬ ಸಂಸ್ಥೆ ಆರಂಭಿಸಿ ಮುನ್ನಡೆಸುತ್ತಿದ್ದರು.!