ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನಡೆವಾತನ ಕಾಲ ತರಿದು, ಕೊಡುವಾತನ ಕೈಯ ಮುರಿದು,
ನುಡಿವಾತನ ನಾಲಗೆಯ ಕಿತ್ತು, ನೋಡುವಾತನ ಕಣ್ಣ ಕಳೆದು,
ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು, ಅರಿದ ಮತ್ತೆ
ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ,
ತನುವಿನ ಮೇಲಣ ಕುರುಹು, ಮನದ ಮೇಲಣ ಸೂತಕ.
ನೆನಹು ನಿಷ್ಪತ್ತಿಯಾದಲ್ಲಿ,
ಕಾಮಧೂಮ ಧೂಳೇಶ್ವರ, ಏನೂ ಎನಲಿಲ್ಲ.
-ಮಾದಾರ ಧೂಳಯ್ಯ




























