ದಾವಣಗೆರೆ: ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 4 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿಳಿಚೋಡು ವಿ.ವಿ. ಕೇಂದ್ರಕ್ಕೆ ಸಂಬಂಧಿಸಿದ ಶಂಭುಲಿಂಗೇಶ್ವರ ಎನ್ಜೆವೈ 11ಕೆವಿ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಜಗಳೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ದಾವಣಗೆರೆ: ದಾವಣಗೆರೆ ಮತ್ತು ಕೆ.ವಿ ಯರಗುಂಟಾ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಫೀಡರ್ಗಳಲ್ಲಿ ಬೆವಿಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಜೂನ್ 4 ರಂದು ಬೆಳಿಗ್ಗೆ 09-00 ರಿಂದ ಸಾಯಂಕಾಲ 05-00 ಗಂಟೆಯವರೆಗೆ ಕರೂರು ಇಂಡಸ್ಟ್ರೀಯಲ್ ಫೀಡರ್ ಮತ್ತು ಸುತ್ತಮುತ್ತಲ ಪ್ರದೇಶಗಳು, ಜಿಲ್ಲಾಧಿಕಾರಿಗಳ ಕಛೇರಿ , ಜಿ.ಎಮ್.ಐ.ಟಿ ಹಿಂಭಾಗ, ಸ್ಮಾರ್ಟ್ ಸಿ.ಟಿ ಆಫೀಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. ಜಯನಗರ ಫೀಡರ್,ಇ.ಎಸ್.ಐ ಹಾಸ್ಪೀಟಲ್ ಸುತ್ತಮುತ್ತ, ರಾಷ್ಟ್ರೋತ್ತನ ಶಾಲೆ, ದುರ್ಗಾಂಭಿಕಾ ದೇವಸ್ಥಾನ, ನಿಟ್ಟುವಳ್ಳಿ ಬಡಾವಣೆ, ಚಕ್ಕಿನಹಳ್ಳಿ ಬಡಾವಣೆ, 60 ಅಡಿ ರಸ್ತೆ, ¸ಸೈಯದ್ ಪೀರ್ ಬಡಾವಣೆ, ಮೌನೇಶ್ವರ ಬಡಾವಣೆ, ಮಂಜುನಾಥ ಲೇಔಟ್, ಸರಸ್ವತಿ ಬಡಾವಣೆ ಬೆಸ್ಕಂ ಆಫೀಸ್ ದುರ್ಗಾಂಭಿಕಾ ಶಾಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮ ದೇವಸ್ಥಾನ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಬೆಸ್ಕಾಂ ದಾವಣಗೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ರವರು ತಿಳಿಸಿದ್ದಾರೆ.






























