ಲಖನೌ: ಹೌದು ಕೇಕ್ ಅವರ ಪಾಲಿಗೆ ಬಂದ ಮೃತ್ಯು ಹೇಗೆ ಅಂದ್ರೆ, ಹುಟ್ಟುಹಬ್ಬ ಆಚರಣೆ ವೇಳೆ ಮುಖಕ್ಕೆ ಕೇಕ್ ಬಳಿಯುವ ವಿಚಾರವಾಗಿ ಶುರುವಾದ ವಾಗ್ವಾದ ತೀವ್ರಗೊಂಡು, ಹುಟ್ಟುಹಬ್ಬ ಆಚರಿಸಿಕೊಂಡ ಯುವಕನು ಮೂವರು ಸ್ನೇಹಿತರನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಗಳಲ್ಲಿ ಒಬ್ಬರು ಸ್ಥಳೀಯ ಬಿಜೆಪಿ ಮುಖಂಡರ ಸಹೋದರನಾ ಗಿದ್ದು, ಇನ್ನಿಬ್ಬರು ಅವರ ಸೋದರಳಿಯ ಆಗಿದ್ದರು. ‘ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಇತರಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)

































