ಚಿತ್ರದುರ್ಗ : ಮಾಜಿ ಪ್ರಧಾನಿ ಮಣ್ಣಿನ ಮಗ ಹೆಚ್.ಡಿ.ದೇವೆಗೌಡರ 94 ನೇ ಹುಟ್ಟುಹಬ್ಬವನ್ನು ಜೆಡಿಎಸ್. ಕಚೇರಿಯಲ್ಲಿ ಸೋಮವಾರ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ರವೀಂದ್ರಪ್ಪ ಮಾತನಾಡಿ ಹೆಚ್.ಡಿ.ದೇವೆಗೌಡರವರು ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿದ್ದಾಗ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಸಂಕಷ್ಟದಲ್ಲಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಿದರು ಎಂದು ಗುಣಗಾನ ಮಾಡಿದರು.
ಇಳಿಯ ವಯಸ್ಸಿನಲ್ಲಿಯೂ ಹೆಚ್.ಡಿ.ದೇವೆಗೌಡರಿಗೆ ರೈತರ ಬಗ್ಗೆ ಕಾಳಜಿಯಿದೆಯಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ದೀನ ದಲಿತರು. ಅಲ್ಪಸಂಖ್ಯಾತರ ಹಿತ ಬಯಸುತ್ತಾರೆಂದು ಹೇಳಿದರು.
ಜೆಡಿಎಸ್.ಜಿಲ್ಲಾಧ್ಯಕ್ಷ ಮಂಜುನಾಥ ಕೆ. ಮಾತನಾಡಿ ಹಿಂದಿನಿಂದಲೂ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೂರು ವರ್ಷಗಳ ಕಾಲ ಬಾಳಲಿ. ಭಗವಂತ ಆರೋಗ್ಯ ಕರಣಿಸಲಿ ಎಂದು ಶುಭ ಹಾರೈಸಿದರು.
ಜೆಡಿಎಸ್. ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಹನುಮಂತರಾಯ, ಜೆಡಿಎಸ್.ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ
ಹಿರಿಯೂರು ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಜಲದಪ್ಪ, ಮಹಲಿಂಗಪ್ಪ ಪರಮೇನಹಳ್ಳಿ, ಪಾತಲಿಂಗಪ್ಪ ಲಿಲಾಜನಹಳ್ಳಿ, ಚಂದ್ರಪ್ಪ ಪಿಲಾಜನಹಳ್ಳಿ, ಗೋವಿಂದರಾಜು ಜವನಗೊಂಡನಹಳ್ಳಿ, ರಾಧಮ್ಮ, ಗೀತಮ್ಮ, ರಘು ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.































