ಜಮೀನಿಗೆ ದನ ಬರುತ್ತೆ ಎಂದು 15 ದನಗಳನ್ನು ಶೂಟ್ ಮಾಡಿದ ವ್ಯಕ್ತಿ

ಕೊಲ್ಲೂರು : ಜಮೀನಿಗೆ ದನಗಳು ಬರುತ್ತೆ ಅಂತ ವ್ಯಕ್ತಿಯೊಬ್ಬ ಅಕ್ಕಪಕ್ಕದ ಮನೆಯವರ ದನಗಳ ಮೇಲೆ ಕೋವಿಂದ ಗುಂಡು ಹೊಡೆದಿದ್ದು, ಅವರುಗಳಲ್ಲಿ 4 ದನಗಳ ಸಾವನಪ್ಪಿದೆ. ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡು ಎಂಬಲ್ಲಿ ನರಸಿಂಹ ಎಂಬಾತನೇ ಮೂಕಪ್ರಾಣಿಗಳ ಮೇಲೆ ಕ್ರೌರ್ಯ ಮೆರೆದಿದ್ದು, ಇದೀಗ ನಾಪತ್ತೆಯಾಗಿದೆ.

ಇಲ್ಲಿನ ನಿವಾಸಿ ಗುಲಾಬಿ (39) ಎಂಬವರು ಸೆಪ್ಟೆಂಬರ್ 23ರಂದು ಸಂಜೆ ಕೆಲಸ ಮುಗಿಸಿ ವಾಪಾಸ್ ಮನೆಗೆ ಬಂದಾಗ, ಅವರು ಮೇಯಲು ಬಿಟ್ಟಿದ್ದ ದನಕ್ಕೆ ಗಾಯವಾಗಿ ಗದ್ದೆಯಲ್ಲಿ ಸತ್ತುಬಿದ್ದಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತನ್ನು ವಿಚಾರಿಸಿದಾಗ ಆತ ಕೋವಿ ತೋರಿಸಿ, ತಾನೇ ದನಗಳಿಗೆ ಗುಂಡು ಹೊಡೆದಿದ್ದು, ನಿಮಗೂ ಗುಂಡು ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ.

ನಂತರ ಅಂಗಡಿಜೆಡ್ಡು ಪರಿಸರದಲ್ಲಿ ಮತ್ತೆ ದನಗಳು ಸತ್ತಿದೆ. 11 ದನಗಳಿಗೆ 3 ಗಾಯವಾಗಿದ್ದು, ಅವುಗಳಲ್ಲಿ ಹುಳಗಳಾಗಿವೆ. ಈ ಬಗ್ಗೆ ದನದ ಮಾಲಕರು ವಿಚಾರಿಸಿದಾಗ ನರಸಿಂಹ ತಾನು ಈಗಾಗಲೇ 4 ದನಗಳನ್ನು ಕೊಂದ್ದಿದ್ದಾಗಿ ಹೇಳಿದ್ದಾನೆ. ಈ ಬಗ್ಗೆ ಇದೀಗ ದನಗಳ ಮಾಲಕರು ಕೊಲ್ಲೂರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement