ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಾಳೆಗೆ ಪೂರ್ಣ?

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಮುಂದುವರಿದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಕಾರ್ಯಾಚರಣೆನಾಳೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ಬುಧವಾರ ಇಂಡಿಯಾ ಟುಡೇ ವರದಿ ಮಾಡಿದೆ.

ನವೆಂಬರ್ 17 ರಿಂದ ವಿರಾಮದ ನಂತರ ರಿ ಡ್ರಿಲ್ಲಿಂಗ್ ಕೆಲಸವು ಮಂಗಳವಾರ ತಡವಾಗಿ ಪುನರಾರಂಭವಾಗಿದ್ದು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈಗಾಗಲೇ 67 ಪ್ರತಿಶತ ಪೂರ್ಣಗೊಂಡಿದೆ. ರಕ್ಷಣಾ ಏಜೆನ್ಸಿಗಳು ಅವಶೇಷಗಳ ಮೂಲಕ 39 ಮೀಟರ್‌ಗಳನ್ನು ಯಶಸ್ವಿಯಾಗಿ ಕೊರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಮಿಕರ ರಕ್ಷಣೆಗೆ ತೀವ್ರ ಅಡಚಣೆ ಉಂಟುಮಾಡಿದ ಬಂಡೆಯನ್ನು ಭೇದಿಸಿದ ನಂತರ ಕೊರೆಯುವಿಕೆಯು ವೇಗವನ್ನು ಪಡೆದುಕೊಂಡಿದೆ. ಸಿಕ್ಕಿಬಿದ್ದ 41 ಕಾರ್ಮಿಕರನ್ನು ತಲುಪಲು ’18 ಮೀಟರ್‌ಗಳು ಇನ್ನೂ ದೂರ ಹೋಗಬೇಕಿದೆ ಎಂದು ತಿಳಿದುಬಂದಿದೆ

ನವೆಂಬರ್ 12ರಂದು, ಸಿಲ್ಕ್ಯಾರಾದಿಂದ ಬಾರ್ಕೋಟ್‌ಗೆ ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ 60 ಮೀಟರ್ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕುಸಿದು 41 ಕಾರ್ಮಿಕರು ಸಿಲುಕಿಕೊಂಡರು. ಸರ್ಕಾರದ ಪ್ರಕಾರ, ನಿರ್ಮಾಣ ಹಂತದಲ್ಲಿದ್ದ 4.5 ಕಿಮೀ (2.8 ಮೈಲಿ) ಸುರಂಗದ ಒಂದು ಭಾಗ, ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ)ವರೆಗೆ ಕುಸಿದಿದೆ. ಕಾರ್ಮಿಕರು 2 ಕಿಮೀ ಸುರಂಗದ ಒಳ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement