‘ತನಿಖೆ ಮುಗಿಯುವರೆಗೂ ಸದನಕ್ಕೆ ಹೋಗುವುದಿಲ್ಲ’ : ಶಾಸಕ ಬಿ.ಆರ್.‌ಪಾಟೀಲ್

ಕಲಬುರ್ಗಿ:  ಸಚಿವ ಕೃಷ್ಣಭೈರೇಗೌಡ ಅವರು ನನ್ನ ವಿರುದ್ಧ ಆರೋಪದ ರೀತಿ ಮಾತನಾಡಿದ್ದಾರೆ. ಕೆ ಆರ್ ಡಿ ಎಲ್ ಕಾಮಗಾರಿಗಳ ತನಿಖೆ‌ ಮುಗಿಯುವರೆಗೂ ಸದನಕ್ಕೆ ಹೋಗೋದಿಲ್ಲ ಎಂದು ಆಳಂದ ಕ್ಷೇತ್ರದ ಶಾಸಕ ಬಿ.ಆರ್.‌ಪಾಟೀಲ್ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಕೆ ಆರ್ ಡಿ ಎಲ್ ಕಾಮಗಾರಿಗಳ ವಿಳಂಬ ಹಾಗೂ ಅರ್ಧಂಬರ್ದ ಕಾಮಗಾರಿಗಳ ಕುರಿತಾಗಿ ಕಳೆದ ಅಧಿವೇಶನದಲ್ಲಿ ಪ್ರಶ್ನೆ ಕೇಳಿ ಸದನ ಗಮನ ಸೆಳೆಯಲಾಗಿತ್ತು. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರ ಕೊಡವಾಗ ತಮ್ಮ ಮೇಲೆಯೇ ಆರೋಪ ಹೊರಿಸಿದ ರೀತಿಯಲ್ಲಿ ಮಾತನಾಡಿದ್ದರು.‌ ಅವರು ಮಾಡಿರುವ ಆರೋಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಯಾಗಬೇಕು. ತನಿಖೆ ಮುಗಿಯುವರೆಗೂ ಸದನಕ್ಕೆ ಹೋಗುವುದಿಲ್ಲ, ಬೆಳಗಾವಿ ಅಧಿವೇಶನದಲ್ಲೂ ನಾನು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಹಣ ಪಡೆದು ಕೆಲಸ ಕೊಟ್ಟಿದಿನಿ ಅಂತಾ ಆರೋಪ ಮಾಡಿದ್ದರು. ಇದರ ವಿರುದ್ಧ ನಾನು ಪ್ರತಿಭಟನೆ ಮಾಡಿದ್ದೆ. ನನ್ನ ಬೆಂಬಲಕ್ಕೆ ಇಬ್ಬರು ಶಾಸಕರ ಹೊರತಾಗಿ ಯಾರು ಬಂದಿಲ್ಲ. ನಮ್ಮ ಜಿಲ್ಲೆಯವರು ನನ್ನ ಬೆಂಬಲಕ್ಕೆ ಬಂದಿಲ್ಲ ನಾನು ಸ್ವಾಭಿಮಾನದಿಂದ ಬದುಕಿದೋನು. ಸ್ವಾಭಿಮಾನ ಇಲ್ಲದಿದ್ರೆ ಬದುಕಿದ್ರೂ ಸತ್ತಂತೆ. ಹೀಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement