ಎಸ್ಇಪಿ ರಚನೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಸಚಿವ ಮಧು ಬಂಗಾರಪ್ಪ

ಬೆಳಗಾವಿ: ರಾಜ್ಯದಲ್ಲ್ಲಿ ಎನ್ಇಪಿ ಹಾಗೂ ಎಸ್ ಇ ಪಿ ಈ ಬಗ್ಗೆ ಸಾಕಷ್ಟು ಗೊಂದಲವನ್ನು ಹುಟ್ಟು ಹಾಕಿದ್ದು ಈಗ ಎಸ್ಇಪಿ ರಚನೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಈ ಬಗ್ಗೆ ಸುವರ್ಣಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಎನ್ಇಪಿ ರದ್ದತಿ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾವಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿರುವುದು ಗೊತ್ತಿದೆ. ಅವರು ಪ್ರಸ್ತಾವಿಸಲಿ, ನಾವು ಸಮರ್ಥ ಉತ್ತರ ನೀಡುತ್ತೇವೆ. ಈಗಾಗಲೇ ಸಮಿತಿ ರಚಿಸಿ ಅಧ್ಯಕ್ಷರ ನೇಮಕವೂ ಆಗಿದೆ. ಎಸ್ಇಪಿ ರಚನೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ನಾವು ಅಧಿಕಾರಕ್ಕೆ ಬಂದರೆ ಎನ್ಇಪಿ ರದ್ದುಪಡಿಸುತ್ತೇವೆ ಎಂದಿದ್ದೆವು. ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ರಚಿಸಲಾಗುತ್ತಿದೆ. ಎನ್ಇಪಿಗಿಂತ ಎಸ್ಇಪಿ ಉತ್ತಮವಾಗಿರಲಿದೆ. ಬಹುಭಾಷೆಯ ಆಯ್ಕೆಗಳು ಇರಲಿವೆ. ಎನ್ಸಿಇಆರ್ಟಿಯಿಂದಲೇ ಪಠ್ಯಕ್ರಮ ಕೊಡಲಾಗುತ್ತದೆ ಎಂದು ಹೇಳಿದರು.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement