ಉತ್ತರ ಪ್ರದೇಶ : UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಆಕರ್ಷಣೆ ಎಷ್ಟಿದೆ ಎಂದರೆ ಜನರು ಲಕ್ಷಗಳ ಸಂಬಳದ ಉತ್ತಮ ಉದ್ಯೋಗವನ್ನು ಸಹ ಬಿಡಲು ಸಿದ್ಧರಾಗಿರುತ್ತಾರೆ. ಐಎಎಸ್ ಅಧಿಕಾರಿ ಉತ್ಸವ್ ಗೌತಮ್ ಅವರ ಕಥೆಯೂ ಇದೇ ಆಗಿದೆ. ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ನಂತರ, ಸುಮಾರು ಒಂದು ವರ್ಷ ಕೆಲಸ ಮಾಡಿದರು. ಇದಾದ ನಂತರ ಐಎಎಸ್ ಆಗುವ ಕನಸನ್ನು ನನಸು ಮಾಡಿಕೊಳ್ಳಲು ಕೆಲಸ ಬಿಟ್ಟರು. ಅವರ ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕ ಕಥೆಯನ್ನು ತಿಳಿಯೋಣ.
ಐಎಎಸ್ ಉತ್ಸವ್ ಗೌತಮ್ ಉತ್ತರ ಪ್ರದೇಶದ ಆಗ್ರಾ ನಿವಾಸಿ. ಉತ್ಸವ್ ಬಾಲ್ಯದಿಂದಲೂ ಅಧ್ಯಯನದಲ್ಲಿ ಉತ್ಸುಕರಾಗಿದ್ದರು. 10 ನೇ ತರಗತಿಯಲ್ಲಿ 91.8 ಶೇಕಡಾ ಅಂಕಗಳನ್ನು ಮತ್ತು 12 ನೇ ತರಗತಿಯಲ್ಲಿ 87.6 ಶೇಕಡಾ ಅಂಕಗಳನ್ನು ಪಡೆದರು. ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಐಐಟಿ ಪಾಟ್ನಾದಿಂದ ಪದವಿ ಪಡೆದರು. ಪದವಿ ಮುಗಿದ ಕೂಡಲೇ ಉತ್ಸವ್ ಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು.
ಸುಮಾರು ಒಂದು ವರ್ಷ ಈ ಕೆಲಸವನ್ನು ಉತ್ಸವ್ ಮಾಡಿದರು. ಇದಾದ ನಂತರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗುವ ಆಲೋಚನೆ ಮಾಡಿದರು. ಈ ನಿರ್ಧಾರದ ನಂತರ, ಅವರು ಒಂದು ದಿನ ತಮ್ಮ ಕೆಲಸವನ್ನು ತೊರೆದರು. ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. ಆದರೆ, ಇದಾದ ನಂತರ ಒಂದರ ಹಿಂದೆ ಒಂದರಂತೆ ಹಲವು ವೈಫಲ್ಯಗಳನ್ನು ಎದುರಿಸಬೇಕಾಯಿತು.
ಉತ್ಸವ್ ಯುಪಿಎಸ್ಸಿಯಲ್ಲಿ ಸತತ ಮೂರು ಪ್ರಯತ್ನಗಳನ್ನು ನೀಡಿದರು. ಮೂರರಲ್ಲೂ ವೈಫಲ್ಯ ಕಂಡರು. ಆದರೆ, ಇದರಿಂದ ಉತ್ಸವ್ ನಿರಾಶರಾಗಲಿಲ್ಲ. ಅವರು ತಮ್ಮ ಸಕಾರಾತ್ಮಕ ಚಿಂತನೆಯೊಂದಿಗೆ ತಯಾರಿಯನ್ನು ಮುಂದುವರೆಸಿದರು. 2017ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿಯನ್ನು ಭೇದಿಸುವಲ್ಲಿ ಯಶಸ್ವಿಯಾದರು.