ಬೆಂಗಳೂರು : ಪ್ರತಾಪ್ ಸಿಂಹನನ್ನು ಪಾರ್ಟಿಯಲ್ಲಿ ತಿರಸ್ಕಾರ ಮಾಡಿ ಬಿಟ್ಟಿದ್ದಾರಲ್ಲ. ಅದಕ್ಕೆ ಕೋರ್ಟ್ಗೆ ಹೋಗಿರಬೇಕು. ದಸರಾ ಉದ್ಘಾಟನೆ ವಿಚಾರ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್, ನಿಸಾರ್ ಅಹಮದ್ ಅವರ ಬಗ್ಗೆ ಬಿಜೆಪಿ ಅವರು ಕೋರ್ಟ್ ಹೋಗಿರಲಿಲ್ಲ. ಪ್ರತಾಪ್ ಸಿಂಹ ಅವರನ್ನು ಪಾರ್ಟಿಯಲ್ಲಿ ತಿರಸ್ಕಾರ ಮಾಡಿದ್ದಾರಲ್ಲ. ಅದಕ್ಕೆ ಕೋರ್ಟ್ ವರೆಗೂ ಹೋಗಿರಬೇಕು ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಗೂ ಮುನ್ನ ಮದ್ದೂರು ಗಲಾಟೆ ಬಗ್ಗೆ ಮಾತಾಡಿದ ಸಿಎಂ, ಬಿಗಿ ಬಂದೋಬಸ್ತ್ ಪೊಲೀಸರಿಗೆ ಸೂಚನೆ ನೀಡಿದರು. ಇದೇ ವೇಳೆ ಮದ್ದೂರು ಎಂಎಲ್ಎ ಏನ್ ಮಾಡ್ತಾ ಇದ್ದಾನೆ ಎಂದು ಕೇಳಿದರು. ಅದಕ್ಕೆ ಸರ್ ಲಂಡನ್ಗೆ ಹೋಗಿದ್ದಾರೆ. ಮಗಳು ಅಲ್ಲಿ ಇದ್ದಾಳೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.