ಅರುಣಾಚಲ : ಕೆಲಸ ಮಾಡಿಕೊಂಡು ಯಶಸ್ವಿಯಾದವರಲ್ಲಿ ಐಎಎಸ್ ಯಶ್ನಿ ನಾಗರಾಜನ್ ಕೂಡ ಒಬ್ಬರು. ಇವರು ಬ್ಯಾಂಕಿನಲ್ಲಿ ಪೂರ್ಣ ಸಮಯದ ಉದ್ಯೋಗದೊಂದಿಗೆ ನಾಲ್ಕನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರ ಯಶೋಗಾಥೆ ಅನೇಕರಿಗೆ ಮಾದರಿಯಾಗಿದೆ.
ಅರುಣಾಚಲ ಪ್ರದೇಶದ ನಿವಾಸಿಯಾದ ಐಎಎಸ್ ಯಶ್ನಿ ನಾಗರಾಜನ್ ಅವರು ಉದ್ಯೋಗದೊಂದಿಗೆ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದರು. ಐಎಎಸ್ ಯಶ್ನಿ ನಾಗರಾಜನ್ ಅವರು ಆಂಧ್ರಪ್ರದೇಶದ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರ ತಂದೆ ತಂಗವೇಲ್ ನಾಗರಾಜನ್ ನಿವೃತ್ತ ರಾಜ್ಯ PWD ಇಂಜಿನಿಯರ್ ಮತ್ತು ಅವರ ತಾಯಿ ಗೌಹಾಟಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಇಟಾನಗರ ಶಾಖೆಯಿಂದ ನಿವೃತ್ತರಾಗಿದ್ದಾರೆ.
ಯಶ್ನಿ ನಾಗರಾಜನ್ 2014 ರಲ್ಲಿ ಯುಪಿಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ EEE ನಲ್ಲಿ ತಮ್ಮ B.Tech ಅನ್ನು ಪೂರ್ಣಗೊಳಿಸಿದರು. ಇದಾದ ನಂತರ ರಿಸರ್ವ್ ಬ್ಯಾಂಕ್ ನಲ್ಲಿ ಗ್ರೇಡ್ ಬಿ ಅಧಿಕಾರಿಯಾಗಿ ಕೆಲಸ ಮಾಡಲು ಆರಂಭಿಸಿದರು. ಬ್ಯಾಂಕ್ ನಲ್ಲಿ ಪೂರ್ಣ ಸಮಯದ ಉದ್ಯೋಗದ ಜೊತೆಗೆ, UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. 3 ಪ್ರಯತ್ನಗಳಲ್ಲಿ ವಿಫಲರಾದ ಅವರು ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು.
ಯಶ್ನಿ ನಾಗರಾಜನ್ ಅವರು 2019 ರ UPSC ಪರೀಕ್ಷೆಯಲ್ಲಿ 57 ನೇ ರ್ಯಾಂಕ್ ಗಳಿಸಿದ್ದಾರೆ. ಆ ಸಮಯದಲ್ಲಿ ಅವರು AGMUT ಅಂದರೆ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶದ ಕೇಡರ್ ಅನ್ನು ಪಡೆದರು. ಮಹಾರಾಷ್ಟ್ರ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸಹಾಯಕ ಕಾರ್ಯದರ್ಶಿಯಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೇರಿದ್ದಾರೆ.