ಹೈದರಬಾದ್: ನಟ ವಿಜಯ್ ದೇವರಕೊಂಡ ಕಾರು ಅಪಘಾತವಾಗಿದ್ದು, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಅಭಿಮಾನಿಗಳಿಗೆ ತಾವು ಸುರಕ್ಷಿತವಾಗಿರುವುದಾಗಿ ಭರವಸೆ ನೀಡಿದ್ದಾರೆ.
ವಿಜಯ್ ದೇವರಕೊಂಡ ಅವರ ಕಾರ್ ಸೋಮವಾರ ಸಂಜೆ ಜೋಗುಳಂಬ ಗಡ್ವಾಲ್ ಜಿಲ್ಲೆಯ ಉಂಡವಳ್ಳಿಯಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ನಟ ಪುಟ್ಟಪರ್ತಿಯಿಂದ ಹೈದರಾಬಾದ್ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೈಗರ್ ಸ್ಟಾರ್ ಹೀಗೆ ಬರೆದಿದ್ದಾರೆ, “ಎಲ್ಲವೂ ಚೆನ್ನಾಗಿದೆ! ಕಾರು ಅಪಘಾತಕ್ಕೀಡಾಯಿತು, ಆದರೆ ನಾವೆಲ್ಲರೂ ಚೆನ್ನಾಗಿದ್ದೇವೆ.. ದೊಡ್ಡ ಅಪ್ಪುಗೆಗಳು ಮತ್ತು ನಿಮ್ಮೆಲ್ಲರಿಗೂ ನನ್ನ ಪ್ರೀತಿ. ಈ ಸುದ್ದಿ ನಿಮ್ಮನ್ನು ಒತ್ತಡಕ್ಕೆ ಒಳಪಡಿಸಲು ಬಿಡಬೇಡಿ ಎಂದಿದ್ದಾರೆ. ಹಿಂದಿನ ದಿನ ಅಪಘಾತದ ಬಗ್ಗೆ ತಿಳಿದ ನಂತರ ಕಳವಳ ವ್ಯಕ್ತಪಡಿಸಿದ್ದ ಅವರ ಅಭಿಮಾನಿಗಳಿಗೆ ನಟನ ಸಂದೇಶವು ಸಮಾಧಾನ ತಂದಿದೆ.
.