ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತಿಥಿವಾರವೆಂದರಿಯೆನಯ್ಯಾ, ಲಗ್ನವಿಲಗ್ನವೆಂದರಿಯೆನಯ್ಯಾ.
ಇದನರಿತು ಹದಿನಾರು ವಾರ, ಹದಿನೆಂಟು ಕುಲವೆಂದೆಂಬರು.
ನಾವಿದನರಿಯೆವಯ್ಯಾ, ಇರುಳೊಂದು ವಾರ, ಹಗಲೊಂದು ವಾರ.
ಭವಿಯೊಂದು ಕುಲ, ಭಕ್ತನೊಂದು ಕುಲ, ನಾವು ಬಲ್ಲುದು ಇದು ತಾನೆ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
-ಸಂಗಮೇಶ್ವರದ ಅಪ್ಪಣ್ಣ































