ವಿಕ್ರಮ್ ಲ್ಯಾಂಡರ್ ಪುನಶ್ಚೇತನದ ಕುರಿತು ಇಸ್ರೋ ಏನು ಹೇಳುತ್ತದೆ?

ಬೆಂಗಳೂರು:ಚಂದ್ರಯಾನ-3 ಮಿಷನ್ ನ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗೆ ಪುನಶ್ಚೇತನ ನೀಡುವ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಕ್ಟೋಬರ್ 6ರವರೆಗೂ ಮುಂದುವರಿಸಲಿದೆ.

14 ದಿನಗಳ ಕಾರ್ಯಾಚರಣೆ ಬಳಿಕ ನಿಷ್ಕ್ರಿಯ ಸ್ಥಿತಿಯಲ್ಲಿರುವ ವಿಕ್ರಂ ಹಾಗೂ ರೋವರ್ ಜತೆ ಯಾವಾಗ ಸಂಪರ್ಕ ಸಾಧಿಸಲು ಸಾಧ್ಯವಾಗಬಹುದು ಎಂಬ ಬಗ್ಗೆ ನಿಶ್ಚಿತತೆ ಇಲ್ಲ ಎಂದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.

ಅದು ಯಾವಾಗ ಎದ್ದೇಳುತ್ತದೆ ಎನ್ನುವುದು ತಿಳಿಯದು. ಅದು ನಾಳೆಯೂ ಆಗಿರಬಹುದು ಅಥವಾ ಚಂದ್ರದಿನದ ಕೊನೆಯ ದಿನವೂ ಆಗಿರಬಹುದು. ಆದರೆ ನಮ್ಮ ಪ್ರಯತ್ನ ನಡೆಯುತ್ತಿದೆ. ಇವೆರಡೂ ಪುನಶ್ಚೇತನಗೊಂಡರೆ ಮಹತ್ವದ ಸಾಧನೆಯಾಗಲಿದೆ ಎಂದು ಹೇಳಿದ್ದಾರೆ.

Advertisement

ಹದಿನಾಲ್ಕು ದಿನಗಳ ಕಾಲ ಅಂದರೆ ಒಂದು ಚಂದ್ರದಿನದ ವೇಳೆ ಸಂಪೂರ್ಣ ಕತ್ತಲು ಮತ್ತು ಮೈನಸ್ 200 ರಿಂದ 250 ಡಿಗ್ರಿ ಸೆಂಟಿಗ್ರೇಡ್ ಶೀತದ ವಾತಾವರಣದಲ್ಲಿದ್ದ ಲ್ಯಾಂಡರ್ ಮತ್ತು ರೋವರ್ ಸಾಧನಗಳಿಗೆ ವಿದ್ಯುತ್ ದಾಸ್ತಾನು ಮಾಡುವ ಬ್ಯಾಟರಿಗಳಿಗೆ ಧಕ್ಕೆ ಉಂಟಾಗಿ ಇದು ಸ್ಪಂದಿಸದೇ ಇರುವ ಸಾಧ್ಯತೆಯೂ ಇದೆ.

ಚಂದ್ರನ ಮೇಲ್ಮೈ ಉಷ್ಣತೆ ಹೆಚ್ಚಿದಂತೆಲ್ಲ ಇದು ಪುನಶ್ಚೇತನಗೊಳ್ಳುವ ಸಾಧ್ಯತೆಯೂ ಅಧಿಕವಾಗಿರುತ್ತದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ. ಅತ್ಯಂತ ಕಡಿಮೆ ತಾಪಮಾನದಲ್ಲಿ ಕೂಡಾ ರೋವರ್ ಸುಸ್ಥಿತಿಯಲ್ಲಿ ಉಳಿಯುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳು ನಡೆದಿದ್ದರೂ, ವಿಕ್ರಂ ಬಗ್ಗೆ ಅಂಥ ಪ್ರಯೋಗ ನಡೆದಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement