ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

 

ದಾವಣಗೆರೆ; ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನನಾಯಕನಹಳ್ಳಿ, ಸಂತೆಬೆನ್ನೂರು-2 ಹೋಬಳಿ ಸಮೀಪದ ಚಿಕ್ಕುಡಿ, ಅಜ್ಜಿಹಳ್ಳಿ ಗ್ರಾಮಗಳಿಗೆ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಪರಿಣಾಮಕಾರಿಗೊಳಿಸಲು ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ನಿಗಧಿತ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊನ್ನನಾಯಕನಹಳ್ಳಿ ಗ್ರಾಮಕ್ಕೆ ಹೊಸ ನ್ಯಾಯಬೆಲೆ ಅಂಗಡಿಗೆ 49 ಅಂತ್ಯೋದಯ, 180 ಬಿಪಿಎಲ್ ಮತ್ತು 11 ಎಪಿಎಲ್ ಒಳಗೊಂಡಂತೆ ಒಟ್ಟು 240 ಪಡಿತರ ಚೀಟಿಗಳನ್ನು ನಿಯೋಜಿಸಲಾಗುವುದು.

Advertisement

ಸಂತೆಬೆನ್ನೂರು-2 ಹೋಬಳಿ ಸಮೀಪದ ಚಿಕ್ಕುಡಿ, ಗ್ರಾಮಕ್ಕೆ 54 ಅಂತ್ಯೋದಯ, 246 ಬಿಪಿಎಲ್ ಮತ್ತು 5 ಎಪಿಎಲ್ ಒಳಗೊಂಡಂತೆ ಒಟ್ಟು 305 ಪಡಿತರ ಚೀಟಿಗಳನ್ನು ನಿಯೋಜಿಸಲಾಗುವುದು.

ಅಜ್ಜಿಹಳ್ಳಿ ಗ್ರಾಮಕ್ಕೆ 48 ಅಂತ್ಯೋದಯ, 308 ಬಿಪಿಎಲ್ ಮತ್ತು 11 ಎಪಿಎಲ್ ಒಳಗೊಂಡಂತೆ ಒಟ್ಟು 367 ಪಡಿತರ ಚೀಟಿಗಳನ್ನು ನಿಯೋಜಿಸಲಾಗುವುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಕಟಣೆ ಹೋರಡಿಸಿದ 30 ದಿನಗಳೊಳಗಾಗಿ ಉಪನಿರ್ದೇಶಕರು, ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ (ಜಿಲ್ಲಾಡಳಿತ ಭವನದ ಕೊಠಡಿ ನಂ. 4) ಇವರಿಂದ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಚನ್ನಗಿರಿ ತಾಲ್ಲೂಕು ಕಚೇರಿಯಲ್ಲಿ ಸಹ ಪಡೆದುಕೊಳ್ಳಬಹುದೆಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement