ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತಿಲದ ಮರೆಯ ತೈಲವ ಅರೆದು ಕಾಬಂತೆ
ಚಂದನದ ಮರೆಯ ಗಂಧವ ಬಂಧಿಸಿ ಕಾಬಂತೆ
[ಶೃಂ]ಗಿಯ ನಾದವ ಖಂಡಿಸಿ ಅರಿವಂತೆ
ಇಷ್ಟಜ್ಞಾನವನರಿವುದಕ್ಕೆ ಇದೇ ದೃಷ್ಟ.ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
-ಬಿಬ್ಬಿ ಬಾಚಯ್ಯ
































