ಕಾಂಗ್ರೆಸ್ ಸರ್ಕಾರ ಅಧಿಕಾ: ಬಡವರ ಪರವಾಗಿ ದೀನ ದಲಿತರ ಪರವಾಗಿ ಇರುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು ಜಾರಿಗೆ ಬಂದಿಲ್ಲ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರ ಪರವಾಗಿದೀನ ದಲಿತರ ಪರವಾಗಿ ಇರುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿಲ್ಲ. ಬಗರ್ ಹುಕುಂ ಕೊಡುವದರಿಂದ ಆ ಕುಟುಂಬಗಳಿಗೆ ಶಾಶ್ವತ ಆಸ್ತಿಯಾಗಲಿದೆ ಆದ್ದರಿಂದ ಆದಷ್ಟು ಬೇಗ ಮಾಡಬೇಕೆಂದು ಸರ್ಕಾರಕ್ಕೆ ಸಂಸದರಾದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಬಡವರು ಸುಮಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ.ಬಡವರು ಅದರ ಮೇಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.

ಸರ್ಕಾರ ಬಗರ್ ಹುಕ್ಕುಂ ಜಮೀನನ್ನು ಆಯಾಯ  ರೈತರಿಗೆ ಮಂಜೂರು ಮಾಡಿಕೊಡಲಿಕ್ಕೆ ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿ ಆದೇಶ ಮಾಡಿದೆ.ಇವತ್ತಿಗೂ ಕೂಡ ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷದಿಂದ ಯಾವ ಶಾಸಕರು ಕೂಡ ಬಗರ್ ಹುಕ್ಕುಂ ಚೀಟಿ ವಿಚಾರವಾಗಿ ಸಭೆಯನ್ನು ಮಾಡಿಲ್ಲ.. ಅಂತ ಜನ ಬರುತ್ತಿದ್ದಾರೆ.ಕೂಡಲೇ ಬಗರ್ ಹುಕ್ಕುಂ ಕಮಿಟಿ ಮೀಟಿಂಗ್ ಮಾಡಿ.. ಬಡವರಿಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದರು.

ಸಿಗಂದೂರು ಸೇತುವೆ ಉದ್ಘಾಟನೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡದೇ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಡಿ.ಕೆ ಶಿವಕುಮಾರ್ ರವರಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಸಂಸದರು ರಾಜ್ಯದ  224 ವಿಧಾನಸಭಾ ಕ್ಷೇತ್ರಗಳ ಪೈಕಿ 140 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಸಚಿವರು ಇರುವ ಸ್ಥಳಗಳಲ್ಲಿ ಪ್ರೋಟೋಕಾಲ್  ಮೆಂಟೈನ್ ಮಾಡುವುದಿಲ್ಲ, ನಮ್ಮ ಜಿಲ್ಲೆಯಲ್ಲಿಯೇ 198 ಕಾರ್ಯಕ್ರಮಗಳನ್ನು ಮಾಡಿದ್ದಾರೆ.. ಅದರಲ್ಲಿ ಹಲವಾರು ಕಾರ್ಯಕ್ರಮಗಳಿಗೆ ನನ್ನನ್ನು ಕರೆಯದೇ ಮಾಡಿದ್ದಾರೆ ಇದರ ಬಗ್ಗೆ ನಾನು ಜಿಲ್ಲಾಧಿಕಾರಿಗಳಿಗೆ.. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಚೀಫ್ ಸೆಕ್ರೆಟರಿಗೆ ಪತ್ರ ಬರೆಯುತ್ತೇನೆ ಎಂದರು.

ಪ್ರೋಟಾಕಾಲ್ ಮೆಂಟೈನ್ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ… ಸರ್ಕಾರದಲ್ಲಿ ಅದರದೇ ಆದಂತಹ ಕಾನೂನುಗಳಿವೆ.ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಟ್ಟಿಲ್ಲ ಅಂತ ಹೇಳುವ ವಿಷಯ ಇದು ಅಲ್ಲ.. ಶಿವಮೊಗ್ಗ ಜಿಲ್ಲೆಯಲ್ಲಿ ಬರುವಂತಹ ಶಾಸಕರುಗಳಿಗೆ, ಸಂಸದರಿಗೆ. ವಿಧಾನ ಪರಿಷತ್ತಿನ ಸದಸ್ಯರಿಗೆ ಆಹ್ವಾನ ಕೊಟ್ಟಿದ್ದಾರೆ… ಪ್ರೊಟೋಕಲ್ ಇರುವುದೇ ಅಷ್ಟೇ ಎಂದ ಸಂಸದರು, ಯಾವ ಸಂದರ್ಭದಲ್ಲಿ ಕಂಪಲ್ಸರಿ ಬರುತ್ತದೆ ಎಂದರೆ ಮುಖ್ಯಮಂತ್ರಿಗಳನ್ನು ಕರೆಯಬೇಕು.. ಮುಖ್ಯಮಂತ್ರಿಗಳು ಅಧ್ಯಕ್ಷತೆಯನ್ನು ವಹಿಸಬೇಕು ಎನ್ನುವ ಸಂದರ್ಭ ಪ್ರಧಾನ ಮಂತ್ರಿಗಳು ಭಾಗವಹಿಸುವ ಸಂದರ್ಭದಲ್ಲಿ ಬರುತ್ತದೆ.ಆದರೆ ಈ ಮುಖ್ಯಮಂತ್ರಿಗಳು ಈ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ಅಭಿವೃದ್ಧಿಗಿಂತ ರಾಜ್ಯಕಾರಣ ಮುಖ್ಯವಾಗಿದೆ ಎಂದು ಗೋವಿಂದ ಕಾರಜೋಳ ಮುಖ್ಯಮಂತ್ರಿಗಳ ಮೇಲೆ ಕಿಡಿ ಕಾರಿದರು.

 

ಸುಮಾರು 500 ಕೋಟಿ ವೆಚ್ಚ ಮಾಡಿ ಸಿಗಂದೂರು ಸೇತುವೆ ನಿರ್ಮಾಣ ಮಾಡಿದ್ದೇವೆ ಇದರಿಂದ ನೂರು ಕಿಲೋಮೀಟರ್ ಸುತ್ತಿಕೊಂಡು ಬರುವುದು ತಪ್ಪಿದೆ.. ಇದನ್ನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿರವರು ಉದ್ಘಾಟನೆ ಮಾಡಿದ್ದಾರೆ. ಇದು ಒಂದು ರಾಜ್ಯಕ್ಕೆ ಆಸ್ತಿಯಾಯಿತು.. ಇದನ್ನು ನೋಡಿ ಸಂತೋಷ ಪಡಬೇಕು.. ಅದನ್ನು ಬಿಟ್ಟು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕೂತು ಪತ್ರ ಬರೆಯುತ್ತಾರೆ ಎಂದು ಸಂಸದರು ವ್ಯಂಗವಾಡಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon